ಶತಶತಮಾನಗಳ ಕಾಲ ಬದುಕುವ ಮತ್ತು ಬೆಳೆಯುವ ಶಕ್ತಿ ಸಾರ್ಥ್ಯವನ್ನು ಹೊಂದಿದ ಆಲದ ಮರದಂತೆ ಬಸವಣ್ಣನವರು. ಮರದಿಂದ ಸಿಗುವ
ಸಕಾರಾತ್ಮಕ ಶಕ್ತಿಯು ವ್ಯಕ್ತಿಯಲ್ಲಿರುವ ಭಯ, ಬೇಸರ, ಅಜ್ಞಾನವನ್ನು ಕಳೆದು, ಜ್ಞಾನ, ಧರ್ಯವನ್ನು ತುಂಬಿ ವ್ಯಕ್ತಿಗೆ ಆತ್ಮವಿಶ್ವಾಸದ ಜೀವನವನ್ನು
ಹೊಂದಲು ಸಹಕರಿಸುವುದು. ಅಂತೆಯೇ ಬಸವಣ್ಣನವರು ‘ಸಕಲ ಜಿವಾತ್ಮರಿಗೆ ಲೇಸನ್ನೆ ಬಯಸಿದವರು’. ಹಾಗಾಗಿ ಇಲ್ಲಿ ‘ಬಸವಣ್ಣನೆಂಬ
ಆಲದಮರ’ದ ರ್ಣಚಿತ್ರವನ್ನು ನರ್ಮಿಸಲಾಗಿದೆ. ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂಬಂತೆ ವಿಶಾಲವಾದ ಆಲದಮರದ
ರೆಂಬೆಗಳಿಂದ ಇಳಿದುಬರುವ ಬಳ್ಳಿ ರೂಪದ ಬೇರುಗಳು ನೆಲಕ್ಕೆ ಬಾಗುತ್ತವೆ. ಹಾಗೆಯೇ ಮನುಷ್ಯನು ಎಷ್ಟೇ ಎತ್ತರಕ್ಕೆ ಬೆಳೆದರೂ ಅವನಲ್ಲಿ ಬಾಗುವಿಕೆ,
ವಿನಯದ ಗುಣ ಇರಬೇಕು. ಈ ಭೂಮಿಯ ಮೇಲಿರುವ ಸಕಲ ಜೀವಿಗಳಿಗೆ ಬದುಕುವ ಸ್ವತಂತ್ರವಿದೆ. ಅಂತೆಯೇ ರ್ವರೂ ಸಮಬಾಳನ್ನು
ನಡೆಸಬೇಕು ಎಂಬ ಆಶಯ ಇಲ್ಲಿದೆ.
